Monday, March 26, 2007

ಕವನಗ(ಗೋ)ಳು

ಕಳೆದವೆಷ್ಟೋ ತಿಂಗಳು
ಅತ್ತು ಬಾಡಿವೆ ಎನ್ನ ಕಂಗಳು
ನಿನ್ನದೇ ಧ್ಯಾನ ಹಗಲು ಇರುಳು
ತಣಿಯಲಿಲ್ಲ ಮನದ ಮರುಳು

ನೀನಿಲ್ಲದ ಎನ್ನ ಎದೆಯಂಗಳ
ಮೋಡ ಕವಿದ ಬಾಂದಳ
ಅನಿಸುತಿದೆ ಎದೆ ಭಾರ ಭಾರ
ಇದ ಹೊತ್ತು ಸಾಗುವೆನೆ ನಾ ದೂರ ದೂರ?

ಎಲೆ ನನ್ನ ಬಿಳುಪು ಗಲ್ಲದ ನಲ್ಲೆ,
ನಿನ್ನ ಗುಳಿಕೆನ್ನೆಯ ನಗೆಗಾಗಿ ಕಾಯುತಿರುವೆನಿಲ್ಲೇ
ನಿನ್ನ ಬಾಗಿದ ಬಿಲ್ಲಿನಂತಿರುವ ಹುಬ್ಬು
ಹಿಡಿಸುತಿದೆ ನನ್ನಲ್ಲಿ ಪ್ರೇಮದ ಮಬ್ಬು

ನಿನ್ನ ಮುಂಗುರುಳ ಉರುಳು
ಅದ ಸರಿಸುವ ನಿನ್ನ ಬೆರಳು
ಮಚ್ಚೆಯಿರುವ ನಿನ್ನ ಕೊರಳು
ಇದರ ಮುಂದೆ ನಾಚಬೇಕು ವಜ್ರದ ಹರಳು

ನಿನ್ನ ನುಣುಪಿನ ಕೆನ್ನೆಗೆ
ಹೂ ಮುತ್ತು ಇಟ್ಟಾಗ ಒಮ್ಮೆಗೆ
ನೀ ಸೂಸುವ ಹೂನಗೆ
ಸಾಕ್ಷಿಯಾಯಿತು ನಮ್ಮೀರ್ವರ ಪ್ರೇಮಕೆ

ನಿನ್ನ ಬಿಳುಪು ಗಲ್ಲಕೆ ತಾಕಿದ ಅಂಗಿಯ ಮಿಂಚು
ತೋರುತಿತ್ತು ಶುಭ್ರ ಬಾನಿನ ನಕ್ಷತ್ರದಂತೆ
ಮಿನುಗುತಿತ್ತು ಸ್ವರ್ಣದಲ್ಲಿಟ್ಟ ವಜ್ರದ ಬೊಟ್ಟಿನಂತೆ
ಆದರೆ ಅದನ ಸೋಲಿಸುತಲಿತ್ತು ನಿನ್ನ ಕಂಗಳ ಮಿಂಚು

4 comments:

ಯುವಪ್ರೇಮಿ said...

namaste..!!

nimma ee kavana bahala sundaravaagide..!!

avalabagegina ee viraha vedane enta vedaniya..!! :(

nimma kavanagala payana heege saagali..!!

-yuvapremi

Unknown said...
This comment has been removed by the author.
Unknown said...

well.. the rhyme is great! just amazing! I should say that I was completely amazed by the degree of information and meaning in the blog! :)
Cool!

--------------------
http://quillpad.in/kannada/
The one true Indian site to Offer Kannada language solutions with middle english options.
Fast, Reliable and comfortable! Intuitive! :-)

ಶ್ರೀನಿಧಿ.ಡಿ.ಎಸ್ said...

ಹ್ವಾ ಗುರು, ಈ ಬ್ಲಾಗು ಅಪ್ ಡೇಟೇ ಆಗಲ್ಯಲೋ!:(

ತಗ, ಈ ಇನ್ವಿಟೇಶನ್ ನೋಡು:



ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.